ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಬಂದವರ ಕೂಡೆಲ್ಲ ನೆರೆನಿಂತು ಸೆಣೆಸುವ ರಣನಾಯಕಿಯರೊಡನೆ ಸೆಣೆಸಲಾಳು ನಾನೇ? ಎತ್ತಿ ಬಳಿಯಲ್ಲಿರಿಸಿ ದಯೆತೋರಿನ್ನು ನಿನ್ನ ಹೊನ್ನಡಿಯ ಚಿಗುರ ಮರೆತಲೆವುದೇಕೆ ಇಲ್ಲಿ?
--------------
ನಾರಾಯಣ ಗುರು
ಬಂಧಮೋಕ್ಷಗಳಲ್ಲಿ ಭೇದ ಕಂಡಿಲ್ಲಿ ಕಠಿಣವ್ರತ ಹಮ್ಮಿಕೊಂಡವರಿಗುಳ್ಳ ಮಹಿಮೆ ಅತಿಎತ್ತರದ್ದು ಧರೆಯಲಿ
--------------
ನಾರಾಯಣ ಗುರು
ಬಂಧುಗಳಿಲ್ಲ ಬಲವೂ ಧನವೂ ನೆನೆದೊಡೆ ಏನ ಕೊಂಡಿದು ಬೆಳೆಯಿತಯ್ಯೋ ವಿಚಿತ್ರ ಎನ್ನೊಡೆಯನ ಆಟವಿದೆಲ್ಲ ಎಂದರಿಯಲು ಅಂಧತ್ವವಿಲ್ಲದಕೆ ನೀನೊಲಿಯೊ ಶಂಭೋ.
--------------
ನಾರಾಯಣ ಗುರು
ಬಗೆಯಿರುವೊಡಲು ತಾನೇ ತನ್ನ ಬಗೆ ಯಾವುದೆಂದು ಹೇಳುತ್ತಿರೆ ಬಗೆ ಯಾವುದೆಂದು ಕೇಳರು ನೆನೆವುಕಂಗಳುಳ್ಳವರು.
--------------
ನಾರಾಯಣ ಗುರು
ಬಗೆಯೆಂದು ಇದಕೆ ಹೇಳುವು- ದಿಂಥದ್ದೆಂದು ತಿಳಿಸಲು ಬಗೆಯಿಲ್ಲದೊಡೆ ಇಲ್ಲ ಏನೂ ಇಂಥದ್ದೆಂಬುದು ಧರೆಯಲಿ.
--------------
ನಾರಾಯಣ ಗುರು
ಬಡತನ ಹೆಚ್ಚಿತು ಹುಲ್ಲು ಮರಗಳು ದಹಿಸಿದವು ದೈವವೇ! ನೀರಿಲ್ಲದೆ ತುಂಬಿತು ಸಂಕಟವಯ್ಯೋ  ನೀನೇನೂ ನೆನೆಯಲಿಲ್ಲವೇ? ಯಾರಿರುವರು ಇಷ್ಟು ಕೃಪಾಮೃತ ಸುರಿಯ- ಲೆಂದು ನೆನೆದಿದ್ದವರಲ್ಲಿ ಈ  ಕ್ರೂರಕಿಚ್ಚಿಕ್ಕಲು ಮುಂದಾದದ್ದು ಸರಿಯೇ ಹೇಳರ್ಧನಾರೀಶ್ವರಾ 
--------------
ನಾರಾಯಣ ಗುರು
ಬಯಕೆ ಹುಟ್ಟಿಸುವ ಈ ವಿಷಯದಲ್ಲಿಂದು  ನಟನೆಗೈಯ್ಯಬಾರದು ಇನ್ನು  ಸವಿಯುಳ್ಳ ಹೆಂಡದಂತ ಯೌವನವಲ್ಲದೆ  ಹೆಚ್ಚಿತು ಇವನಿಗೆ ಕೂಟತನ ತುಂಬಿದೊಡೆ  ಕಟ್ಟಿಹಾಕುವ ಕರಣದ ಮುಚ್ಚಲವನ್ನು  ಸುಟ್ಟುಹಾಕಲೊದಗಿದ ಹಣೆಯ  ಕಿಚ್ಚು ಇಂತಿರಲು ಓಡಿಹೋಗಲು  ಮುದದಿಂದ ಕೃಪೆದೋರೋ ಮುರುಗನೇ
--------------
ನಾರಾಯಣ ಗುರು
ಬಯಲದುಬಂದೆನ್ನ ಮುಂದೆ ಅರಿವಾಗಿ ಎಲ್ಲವನ ನುಂಗಿ ಬರಿ ಬಯಲಾಗಿ ಬಯಲ ಮೊದಲೈದಲ್ಲಿಯೂ ಒಂದಾಗಿ ಬೆಳಗಿಯಾಡುವುದೇ ತಿರುನಟನೆ.
--------------
ನಾರಾಯಣ ಗುರು
ಬಯಲೊಳಿದ್ದು ವಿವರ್ತವಿಲ್ಲಿ ಕಾಣ್ಬ ಬಯಲು ಮುಂತಾದ ವಿಭೂತಿ ಐದೂ ನೆನೆದೊಡೆ ಜಲನಿಧಿ ತನ್ನೊಳೇಳ್ವ ತರಂಗಾ- ವಲಿಯ ಹಾಗೆ ಅಭೇದವಾಗಿ ಬರಬೇಕು.
--------------
ನಾರಾಯಣ ಗುರು
ಬಯಸುವುದೂ ಹಗೆಯುವುದೂ ಎಂಬುದಿಲ್ಲವನ ಕಾಲು ಸೇರುವೊಡೆ ಅವರಿಗೇನೂ ಇಲ್ಲ ಬವಣೆ ಯಾವ ಕಾಲದ್ಲಲೂ
--------------
ನಾರಾಯಣ ಗುರು
ಬರಿಸುಳ್ಳ ಬಿತ್ತಿ ಹಳೆತಪ್ಪು ಗುಡಿಸಲುಗಟ್ಟಿ- ದೀಯೊಡಲು ಎಂಜಲನ್ನವನುಂಡು ತಿರುಪೆಯ ಪಾತ್ರೆ ಕೋಲೆತ್ತಿ ಬುಡವಂತು ಮಾಸಿಹೋಗುವ ಮುನ್ನ ಹಚ್ಚೆ ಹೊನ್ನವಿಲೇರಿ ಚಂದದಲಿ ಮೆರೆಯುತ್ತ ಹೊಸ್ತಿಲಲಿ ಮಲಗಿರುವ ತಿರುಕನಿಗೆ ನೀಡಯ್ಯ ಗತಿಯೊಂದೂ ಮತ್ತೆನಗೆ ಇಲ್ಲ ಯಾರೂ ಈಗ
--------------
ನಾರಾಯಣ ಗುರು
ಬರುವ ಆರುವಿಧ ವಿಕಾರವೂ ಬರುವಂತಿಲ್ಲ ಅರಿವಿಗೆ ಇದು ದಿಟ ತನುವೆಂಬ ಒಡಲುಬಿಟ್ಟು ಕೀರ್ತಿಯೆಂಬ ಒಡಲಾಂತಿಲ್ಲಿ ಅನುಕಂಪೆ ಉಳಿಯುವುದು.
--------------
ನಾರಾಯಣ ಗುರು
ಬಲುಮಾಯೆಯ ಧೂಳಡಗಿ ಮರೆಯೊಳು ಮರೆಗೊಂಡಿಹ ಪರಬಯಲೇ ಕಿರಿದೊಂದೊಂದು ಅದೊಂದಾ- ಮರೆಯಲಿ ಸುಳಿದು ಹೊಗೆಯಾಗಿಸುವ ಹೊಗೆಯೂ ನೀ.
--------------
ನಾರಾಯಣ ಗುರು
ಬಳಿಕ ಒಂದೊಂದರಲ್ಲೂ ಕುರುಹು ಬೇರೆಬೇರೆಯಾಗಿರಲು ಅರಿಯುವೆವು ಹಲವಾಗಿ ಬೇರ್ಪಡಿಸುತ್ತಲಿಲ್ಲಿ ನಾವು.
--------------
ನಾರಾಯಣ ಗುರು
ಬಳಿಯಲಿದ್ದು ನೀಡುವಂತ ವರವು  ದಿನಮಣಿ ಹೊದ್ದ ಒಡೆಯನಿದೊಂದೂ ಅಣುವಿನಷ್ಟೂ ಬೇರಾಗದಿರುವೆನ್ನ ಮಣಿಗಳೆಮಗೆ ನೀಗಿಸುವವು ಬರುವ ಕಷ್ಟವನ್ನು. 
--------------
ನಾರಾಯಣ ಗುರು