ಪ್ರಾರಂಭ ಪದದ ಹುಡುಕು
ಎಂಜಲನ್ನವನುಂಡವಗೋರ್ವ ಮಗನಾದನೀನು ತಿರುಕ ನಾನು ಭಿಕಾರಿ, ಮಾಳ್ಪ ತಪ್ಪು-ಗಳೆಲ್ಲವೂ ನೀನು ಮನ್ನಿಸುವುದು ನ್ಯಾಯ.ತಂದೆಗೆ ಮಕ್ಕಳು ಕಾಲಡಿಯಿಂದೊದ್ದರೂಎಲ್ಲವನು ಕ್ಷಮಿಸಿ ಆ ಕೂಸುಗಳಿಗುಳ್ಳಅಭೀಷ್ಟಗಳ ದಯೆಯಿಂ ನಡೆಸಿ ಕೊಡುವೆಯಲ್ಲೋ.
ಎಂಟುಗೇಣು ರೋಡಿನ ಶಕಟವನ್ನೆಳಯುತ್ತಮೇಲ್ಬಿಗಿದು ಕೆಳಬಿಗಿದು ಸಂಚಾರನಡೆಸಿರುವತುರಗದ್ವಯವನ್ನು ಹೂಡಿ ಓಡಿಸುತ್ತ ಇಳಿದುಐದಾರು ಎಂಟು ಕಳೆದರಮನೆಯ ಹೊಕ್ಕುತ್ತಸುಖದಿಂದಲಲ್ಲಿದ್ದು ಎನ್ನ ಎದೆಯಾರಿ ಹಾಲಕುಡಿಯಲು ಒಡೆಯ ನೀ ವರವ ನೀಡೋ.
ಎಂಟುಸುತ್ತಲಿ ಮೋಕ್ಷಮಾರ್ಗವ ಮುಚ್ಚಿಮೆರೆವ ಕುಂಡಲಿನಿಯಕಟ್ಟುಹರಿದು ಚಿಗಿರಿ ಮಂಡಲವೂ ತಮ್ಮಪಾದ ತುಷ್ಟಿಯಿಂದ ಹಿಡಿಯಲು ಕೃಪೆದೋರುವುದೆಂದಿಗೆ ಭವಾಬ್ಧಿಯಲಿಬಿದ್ದು ಹೋಗದಿರಬೇಕಿನ್ನು, ಒಡೆಯನೆ ಷಣ್ಮುಖ ಪಾಹಿಮಾಂ
ಎಂತಯ್ಯೋ ನೀಯೆಂದೂ ಚಿಂತೆಗೆಬರುವೆ ನೀಗಿದ ಚಿನ್ಮಯವೇ ಬೆಂದುನೀಗುವ ಅಹಂತೆಗೆ ಸಂಜೆದಿಂಗಳ ತೊಟ್ಟ ಕೋಮಳವೇ.
ಎಚ್ಚರದವಸ್ಥೆ ನಿದ್ದೆಯೊಳಿಲ್ಲ ನಿದ್ದೆಮತ್ತೆದ್ದಾಗಲದೂ ಸ್ಫುರಿಸುವುದಿಲ್ಲ;ಅನುದಿನ ಹೀಗೆ ಇವೆರಡೂ ಆದಿಮಾಯಾ-ವನಿತೆಯಿಂದ ಹುಟ್ಟಿ ಬದಲಾಗುತಿಹುದು.
ಎಚ್ಚರಿಸಬಾರದಿನ್ನು ನಿದ್ರಿಸದೆ ಇರಬೇಕುಅರಿವಾಗಿ ಇದಕ್ಕಿಂದು ಅಯೋಗ್ಯನೆಂದೊಡೆಪ್ರಣವ ಎದ್ದು ಹುಟ್ಟಳಿದು ಬಾಳ್ವಮುನಿಜನಸೇವೆಯೊಳ್ ಮೂರ್ತಿಯನ್ನಿಕ್ಕಬೇಕು.
ಎಡೆಯಿಲ್ಲವೆನಗೆ ಎಡೆಯಲ್ಲಿಂದು ಕಾಣುವ ಈಧೂಳಿಂದ ಮರೆವ ಒಡಲಿಗೆ ಹೊನ್ನವ್ವತಡೆಯಿಲ್ಲ ಏನೂ ಅದರಿಂದ ಎನಗಿಂದುನಿನ್ನೊಡಲೊಂದು ನೀಡಿ ಮತ್ತೆ ನುಡಿ ಮಾಣಿಕ್ಯವೇ.
ಎಣೆಗೂಡಿಯೇಳುವುದೆಲ್ಲಒಂದು ಬಗೆ, ಎಣೆಗೂಡದ್ದು ಬಗೆಯಲ್ಲ, ಬಗೆಯಹುದುಎಣೆಗೂಡಿ ಕಾಂಬುದೆಲ್ಲ.
ಎನ್ನಪಾಪ ಹರಿಯಲು ಅಂಬಾದ ಅರಿವು ನಿನ್ನ ಪಾದಪುಷ್ಪದಲೇಳುವ ನನ್ನೊಲವೆ ಮೌರ್ವಿ ಉಕ್ಕಾದ ಮನವೆ ಧನು ಹಮ್ಮಿಗನೆ ವಿಜಯಿಅಂಬೇ ನೀ ನೀಡುವ ಜಯದಿಂದ ಬೋಧವಾಗುವೆ ಪಾಪಪಂಕಿಲ ನಾನು ಹೆಬ್ಭಾರವಾದ ತನು ಬೋಧವಾದ ಜಗವು ಬೋಧವಾಗುವುದೆಲ್ಲವೂ.
ಎರೆ ಮುಂತಾದವುಗಳೆಂದೂ ಈ ತೆರದಿಬರುವುದಿನ್ನೂ; ಬರಲೊಲ್ಲದೆ ನಿಲ್ವುದೊಂದೇ;ಅರಿವದು ನಾವದುತಾನೆ ಮತ್ತೆಲ್ಲರೂಅದರ ರೂಪವದಾಂತು ನಿಲ್ಲುತಿಹುದು.
ಎಲ್ಲರೂ ಆತ್ಮಸಹೋದರರೆಂದಲ್ಲವೇಹೇಳಬೇಕು, ನೆನೆದೊಡೆ ಇದ ನಾವುಕೊಲ್ಲುವುದು ಹೇಗೆ ಜೀವಿಗಳಇನಿತೂ ಕೃಪೆಯಿರದೆ ಭುಜಿಸುವುದೂ
ಎಲ್ಲವನರಿತು ಒಡೆಯನಿವನಿಂದೆತ್ತಿ ಹೇಳಬೇಕೇ ದುರಿತವೆಲ್ಲವ ನೀ ಕಳೆಯಬೇಕುಇಲ್ಲವಾರೂ ಇಲ್ಲಿ ಅಡಿಯನಿಗೆ ನೀವು ಕೈಬಿಟ್ಟರೆಎಲ್ಲವೂ ಕಳೆದು ಎತ್ತನೇರಿ ಬರುವ ಶಂಭೋ.
ಎಲ್ಲೆಯಿಲ್ಲದೆ ಉಕ್ಕಿ ಹರಿವ ನಿನ್ನ ಅತಿರಸದ ಕರುಣೆಯ ತೆರೆಮಾಲೆಯೊಳ್ ಗತಿಬರುವಂತೆ ಮುಳುಗುತ್ತಲೆದ್ದು ನಿಲ್ಲಲಿಕ್ಕೋಸುಗ ಕೃಪೆದೋರೊ ನೀನು.