ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಕಂಕಮಾದಿಗಳುಣ್ಣುವ ಅಶನ ಕಳೇಬರವಿದಲ್ಲವೇ ಹೆಗ್ಗಲಾವತಿ! ಬಳಲಿಸುತ್ತಿದೆಯಿದು ಮತಿಪ್ರಸಾದವ ನೀಡು ನೀ ತಿಂಗಳಮೌಲಿ ತಿರುಮೈ ಸೋಕಿ ಎಡೆಗೂಡಿ ನಿತ್ಯವೂ ಇರುವೆನ್ನ ಚಿನ್ನವೇ! ಸಕಲ ಸಂಕಟಗಳೂ ಕಳೆಯಲು ನೀಡು ವರವ.
--------------
ನಾರಾಯಣ ಗುರು
ಕಂಗಳವೆಷ್ಟು ಬುರುಡೆಗಳೆಷ್ಟು ಹುಲಿಯಾನೆ ಚರ್ಮಗಳವೆಷ್ಟು ತಿಂಗಳ ಕಲೆಗಳೆಷ್ಟು  ವಿಷಕಕ್ಕುವ ಹಾವುಗಳವೆಷ್ಟು  ಅಲೆಯೆದ್ದು ಏಳುವ ಗಂಗೆಯೇ  ನಿನಗೂ ಇದರಂತೆ ಲೆಕ್ಕವಿಲ್ಲ,  ನಿನ್ನ ನೀರಲಿ ಮುಳುಗುವವರನ್ನೆಲ್ಲ ಸಂಸ್ಕರಿಸಿ  ಶಿವಸಾರೂಪ್ಯ ನೀಡುವೆ ನೀನು, ಇದು ದಿಟ.
--------------
ನಾರಾಯಣ ಗುರು
ಕಂಪು ಮೊದಲಾಗಿ ಮಣ್ಣಲ್ಲುಣ್ಣುವವೆಲ್ಲವೂ ಅಳಿದು ಹೋದರೂ ಸೇರಿನಿಲ್ವ ಒಳಚಿಗುರಕರಗಿಸಿ ತಿಕ್ಕಿ ನೆಕ್ಕುವ ಗುಣತುಂಬಿದ ಕೋಮಲಗೊಡದೊಳಂದೂ ಇಂದೂ  ಸಾಟಿಯೊಂದಿಲ್ಲ ಎಲ್ಲೂ ಇಲ್ಲ ಎಲ್ಲೂ ಶುಭಮಂಗಳ
--------------
ನಾರಾಯಣ ಗುರು
ಕಂಸಾಸುರದ್ವಿರದಕೇಸರಿವೀರ, ಘೋರ- ವೈರಾಕರಾಮಯವಿರೋಧಕರಾಜ, ಶೌರೇ, ಹಂಸಾದಿರಮ್ಯ ಸರಸೀರುಹಪಾದಮೂಲ   ಶ್ರೀಭೂಪತೇ, ಹರಹರೇ, ಸಕಲಾಮಯಂ ಮೇ.
--------------
ನಾರಾಯಣ ಗುರು
ಕಟಿಯೆಡೆಯಲ್ಲಿ ಮರೆಯಿದ್ದು ಕೂಡುವ ಧೂಳೊಳುರುಳಿ ಬಳಲಿ ನಾಶವೊಂದಲು ಇವನಿಗೆ ಸ್ಥಿತಿಬಾರದಂತಿರಿಸಿ ಅಡಿಯನು ನೀಡೊ ಪಾರ್ವತೀಶ
--------------
ನಾರಾಯಣ ಗುರು
ಕಡಲತೆರೆಯೂ ತಿಕ್ಕಿಬರುವ ಪ್ರವಾಹವೂ ಎಲ್ಲ ಕಡಲರಾಶಿಯದಾಗಿ ಅಡಗಿ ಕೊನೆಗೊಳ್ಳುವಂತೆ ನಿನ್ನಲಿಂದ ಅಯ್ಯೋ, ಉಕ್ಕಿಬಿದ್ದೆದ್ದು ಮರೆಯಾಗುವುದು ಅಖಿಲಾಂಡವೂ,  ತಾಯ ಬಳಿಯಲ್ಲಿರುವವನೇ, ಜನ್ಮರಹಿತನೇ ಷಣ್ಮುಖ ಪಾಹಿಮಾಂ
--------------
ನಾರಾಯಣ ಗುರು
ಕಡಲು ಸುಳಿಯುವ ಬಲುದೊಡ್ಡ ಧರೆಯಲಿ ಅಪಾರವಾಗಿ ಹಸಿವು ಮಳೆ ಸುರಿಯದಂತಾದರೆ ಬಿಡದಂತೆ ಅಳಲು ಕೂಡುವುದು
--------------
ನಾರಾಯಣ ಗುರು
ಕಡಲು ಸೋರಿಸಿಗಳೆದು ತಿಪ್ಪೆತೋಡಿ  ತಟವದರೊಳಿಟ್ಟು ಉಬ್ಬಿ ನಾರುವ  ಮೊಲೆಗಳನೆತ್ತಿ ಬರುವ ಕೈಬಳೆಯ ಹೆಣ್ಣ  ಅಡಿಯನರಸುತ ನಡೆಸದಿರು ಮಹೇಶಾ.
--------------
ನಾರಾಯಣ ಗುರು
ಕಡಲು, ಅಲೆ, ಗಾಳಿ, ಆಳವೂ ಇದ್ದಂತೆ ನಾವುಗಳು ಮಾಯೆಯೂ ನಿನ್ನ ಮಹಿಮೆಯೂ ನೀನೇ ಎಂದು ಒಳಗೆ ತಿಳಿಯಬೇಕು.
--------------
ನಾರಾಯಣ ಗುರು
ಕಡಲೊಳಗೇಳುವ ತರಂಗಗಳ ಸಾಲಂತೆ ಕಲಕಿ ಬರುವುದು ಒಡನೊಡನೆ ಎದೆಯಳಿದು ಹಲವುಸಂಗವಗಲುವಂತೆ ಘಟಪಟವೆಂದೆತ್ತಿ ಇಲ್ಲಿ ತೊಟ್ಟು ಕಿತ್ತಾಡುವ ಈ ಕೊಡ ಒಡೆಯುವಮುನ್ನ ಎತ್ತಿ ಒಲಿಯೊ ನೀನು 
--------------
ನಾರಾಯಣ ಗುರು
ಕಡಲೊಳೇಳ್ವ ತೆರೆಯಂತೆ ಕಾಯವೊಂದೊಂದು ಒಡನೊಡನೇರಿ ಎದ್ದು ಅಮರುತಿಹುದು ಅಳಿವಿದಕೆಲ್ಲಿದಯ್ಯೋ! ಮೂಲಸಂವಿತ್- ಕಡಲೊಳು ಎಡೆಬಿಡದಂತ ಕರ್ಮವಹುದು.
--------------
ನಾರಾಯಣ ಗುರು
ಕಣಿಕಾಣುವ ಈ ಕನಕಕ್ಕೆ ಕಾರ್ವೇಣಿ ಮಣ್ಣಹಾದಿಯ ಬಿಸಿಲುಗುದುರೆಯ ನೀಗಿಸೆಂದು ಇಗೊ ಹಾಡುವೆ ಬೇನೆ ಕಳೆವಂತೆ ಬಿಟ್ಟಗಲದೆ ಪೊರೆವ ನಿನ್ನಯ ಮಣಿಮೈ ತನ್ನಲ್ಲಿ ಸೇರುವುದಕ್ಕೆ ನೀ ಮೊರೆಯೆ.
--------------
ನಾರಾಯಣ ಗುರು
ಕಣ್ಣದುಂಟೆರಡಾರು ಕಿವಿ, ಅಂತೆಯೇ ಕೈಗಳು,  ಕಾರುಣ್ಯವೀಪರಿ ಇನ್ನಾರಿಗೂ ಇಲ್ಲ, ಕಂಡಿಲ್ಲವೇ ನೀನೀ ದಾಸ ಪಡುವ ಪಾಡನ್ನಿಲ್ಲಿ, ಕಂಡವರು  ದೂರುವುದನೊಂದು ಕಿವಿಯಿಂದಾದರೂ ಕೇಳಲಿಲ್ಲವೇ, ಬೇನೆ ತೀರಿಸಿ ಎನ್ನ ಪೊರೆಯುತ್ತ ಅಭಯವ ನೀಡಲು ಕೈಯ್ಯೊಂದು ತಾನೆ ಸಾಲದೆ?
--------------
ನಾರಾಯಣ ಗುರು
ಕಣ್ಣುಗಳಿಂದ ಹರಿಯುವ ಅಮೃತತೆರೆ- ಗುಂಡಿಗಳಲ್ಲಿ ಬಿದ್ದು ಹರಿವ ಪರಗಡಲ ಸುಳಿಗಳೊಳ್ ಬಿದ್ದು ಸುಳಿಸುಳಿದು ನಿನ್ನ ಚರಣಕ್ಕೆ ಬಂದು ಸೇರುವುದೆಂದಿಗೆ ನಾನು.
--------------
ನಾರಾಯಣ ಗುರು
ಕಣ್ಮಾಯೆಗಳಿವೆಲ್ಲ ಕಂಗಳು ಮೂರಿದ್ದೂ ಕಂಡಿಲ್ಲವೇ ಬಿಳಿದಿಂಗಳ ಮುಡಿದು ಬೆಳಗುವ ಕಣ್ಮಣಿಯೇ ಹೂಪಾದಕೆ ಕೈಮುಗುದಿದೆ.
--------------
ನಾರಾಯಣ ಗುರು