ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಇಂದ್ರಿಯವಾಗುವುದಂದು ಇಂದ್ರಿಯವೂ ಕೆಡುವುದಂದಿಗೆ ಕಾರಿರುಳು ಧರೆಯಲ್ಲುರುಳಿ ಬಿದ್ದೊಡೆ ಕೈಬಿಟ್ಟು ತನ್ನ ನೆಲೆ ತಪ್ಪೀತು ಹಗ್ಗ ಹರಿದೊಡೆ.
--------------
ನಾರಾಯಣ ಗುರು
ಇಂದ್ರಿಯಾಣಾಂ ಹಿ ವಿಷಯಃ ಪ್ರಪಂಚೋ’ಯಮ್ ವಿಸೃಜ್ಯತೇ ಯಯಾ ಸೈವಾ’ಪರಾ’ಧ್ಯಾತ್ಮ- ಸ್ಥೂಲ ಸಂಕಲ್ಪನಾಮಯೀ.
--------------
ನಾರಾಯಣ ಗುರು
ಇಂದ್ರಿಯಾಣಿ ಮನೋಬುದ್ಧಿಃ ಪಂಚಪ್ರಾಣಾದಯೋ ಯಯಾ ವಿಸೃಜ್ಯಂತೇ ಸೈವ ಪರಾ ಸೂಕ್ಷ್ಮಾಂಗಾನಿ ಚಿದಾತ್ಮನಃ.
--------------
ನಾರಾಯಣ ಗುರು
ಇಂದ್ರಿಯಾಣಿ ಮನೋಬುದ್ಧಿಃ ವಿಷಯಾಃ ಪಂಚವಾಯವಃ ಭಾಸ್ಯನ್ತೇ ಯೇನ ತತ್ಸೂಕ್ಷ್ಮಂ ಅಸ್ಯ ಸೂಕ್ಷ್ಮಾಶ್ರಯತ್ವತಃ.
--------------
ನಾರಾಯಣ ಗುರು
ಇಡು ಕಣ್ಮೊನೆಯೆರಡನ್ನೆನ್ನಲಿದೀ  ಅಡಿಯನ ಬಯಕೆ ಉಮಾಪತಿಯೇ ಜಡವಿಂದಿದರಿಂ ಗೆಲುವಿದಕ್ಕೆ  ಎಡೆಯಿಲ್ಲ ಇರುತ್ತಿರಲೊಂದರೊಳೂ 
--------------
ನಾರಾಯಣ ಗುರು
ಇದರಲ್ಲಿ ಬಿದ್ದುಬದುಕಿ ದಿನಗಳೆವುದಕಿಂತ  ಮಿಗಿಲಾಗಿ  ನೆನೆದೊಡೆ ಏನುಂಟು ಬವಣೆ ನನಗೆ ಚಂದ್ರಕಲೆಯ ತೊಟ್ಟ ದೇವನೇ ದಯೆತೋರಿ ಒಳಗಿನ  ಚಂದ್ರಗೊಡತುಂಬಿಹರಿವ ತೊರೆಯ ಮುಡಿದಾಡು ನೀ
--------------
ನಾರಾಯಣ ಗುರು
ಇದರಿಂದ ಕಂಡವಳೊಬ್ಬಾಕೆ ನೀಯೆಂದೂ ಈ  ಮತಿಮಂಡಲವಲ್ಲದೆ ಮತ್ತೆಲ್ಲಿಯೂ  ಕುತೂಹಲಗೊಂಡು ಜಿಗಿದು ಬಳಲದೆ ಕಂಡಲ್ಲಿ ನಿನ್ನ ಪಾದಪುಷ್ಪದಬಳಿ ಪದವೂರಿದೆ ಹೊಂಫಲವೇ.
--------------
ನಾರಾಯಣ ಗುರು
ಇದರೊಳೇಳ್ವ ಆದಿಮಶಕ್ತಿಯಿಲ್ಲಿ ಕಾಂಬುದು ಇದೆಲ್ಲವೂ ಈಯುವ ಆದಿಬೀಜವಹುದು ಮತಿಯದರೊಳಿಟ್ಟು ಮರೆಯದೆ ಮಾಯಾ- ಮತಿಯಳಿಯಲು ಮನನವ ಗೈಯಬೇಕು.
--------------
ನಾರಾಯಣ ಗುರು
ಇದು ಪಥ್ಯವೃತ್ತ ತೊಡರಿಲ್ಲ ಹಾಡುವವರಿಗೆ ಇದಕ್ಕಿಂದು ನಿನ್ನಡಿಯೆತ್ತಿ ನೀಡು ನೀ...
--------------
ನಾರಾಯಣ ಗುರು
ಇದೆ ಇಲ್ಲ ಎಂದು ಅದಲುಬದಲಾಗಿ ಅಸತ್ತು ಸತ್ತು ಎರಡೂ ತೋರುವುದು, ಇದನಾದಿ ತಮಃ ಸ್ವಭಾವ;  ಎರಡೂ ಅರಸಿದೊಡಿಲ್ಲ ಅಸತ್ತು, ಹಗ್ಗದ  ತುಂಡಲ್ಲಿಲ್ಲ ಹಾವು, ಉಳ್ಳದ್ದು ಹಗ್ಗ ಮಾತ್ರ.
--------------
ನಾರಾಯಣ ಗುರು
ಇದೆಯಿದೆ ಎಂದು ಸಕಲೋಪರಿ ನಿಲ್ವುದೊಂದೇ ಸತ್ಯ, ಸಮಸ್ತವನಿತ್ಯವಸತ್ಯವಹುದು ಮಣ್ಣಿನ ವಿಕಾರವದಸತ್ಯ ನೆನೆವೊಡೆ ಇದರೊ- ಳೆಲ್ಲ ವರ್ತಿಸುವುದು ಮಣ್ಣಿನ ಸತ್ಯವಹುದು
--------------
ನಾರಾಯಣ ಗುರು
ಇನಿಮೆ, ಪ್ರೀತಿ, ಅನುಕಂಪೆ ಮೂರಕ್ಕೂ   ತಿರುಳೊಂದೇ ಇದು ಜೀವತಾರಕವು, ’ಕೃಪೆಯಿರುವನೇ ಜೀವಿ’ಯೆಂದು ಜಪಿಸು ಈ ನವಾಕ್ಷರಿಯನ್ನು.
--------------
ನಾರಾಯಣ ಗುರು
ಇನಿಮೆಯ ತುಡಿಯೂ ತುಂಬಿ ಕಿರುನಗೆಗೆದರುವ ತಿಂಗಳಲಿ ತಾವರೆಹೂವ ತುಂಬಿಚೆಲ್ಲುವ ಕಟಾಕ್ಷದ ತಿರುಜೇನಸವಿಮಳೆ ಸುರಿದೊಸೆದು ಕಾಮ ಮುನ್ನವಾಗಿ ಚಿಗುರುವ ಕಳೆಮೊಳೆಗಳ ಹರಿದು  ಒಳನೆಲದಲಿ ಇನಿಮೆಯಬೀಜವಿತ್ತು ಈಯೆನ್ನ ಭಕ್ತಿಯಮೊಳಕೆ ಪಯಿರು ತೆನೆ  ಬರುವಂತಾಗೆಲೊ ತಾರಕಾರೇ.
--------------
ನಾರಾಯಣ ಗುರು
ಇನಿಮೆಯಿಂದ ಬರುವುದಿಂಬು, ಇನಿಮೆಯಿಲ್ಲದೆದೆಯಿಂದ ಬರುವುದು ದುಃಖವೆಲ್ಲವು ಇರುಳು ಇನಿಮೆಯನ್ನು ನೀಗಿಸಿ  ಬೀಜವಾಗಿ- ಯೆಲ್ಲಕ್ಕೂ ಅಳಲಿನ ತಿರುಳಪ್ಪುದು.
--------------
ನಾರಾಯಣ ಗುರು
ಇನಿಮೆಯಿಲ್ಲದಿರೆ ಅಸ್ಥಿ, ತೊಗಲು, ಸಿರೆ, ನಾರುವೊಂದೊಡಲೆ ಅವನು, ಮರಳುಗಾಡಲ್ಲಿ ಹರಿವ ನೀರು  ಆ ಪುರುಷನು ನಿಷ್ಫಲಗಂಧಪುಷ್ಪವು.
--------------
ನಾರಾಯಣ ಗುರು