ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಕಲ್ಲಿನೊಳಗೆ ನೆಲೆಗೊಂಡ ಒಂದಲ್ಪಜಂತು ಅಲ್ಲೊಂದು ನಿನ್ನ ಕೃಪೆಯಿಂದು ತಿಳಿಸುವುದು ತಾವರೆಗೊಡದಲ್ಲಿ ಅಮರುವ ಅಮರೇಂದ್ರನೂ ಮತ್ತೆಲ್ಲರೂ ಇಲ್ಲಿದರೊಳಿದ್ದು ಬೆಳೆವರು ಶಂಭೋ.
--------------
ನಾರಾಯಣ ಗುರು
ಕಳಿಸದಿರು ಚಂಚಲಲೋಚನೆಯೊಡನೆ ಹೊನ್ನ  ಚಿಗುರುಗೈಯಲೆತ್ತಿ ಬುಡಸಹಿತ ಧರೆಯ ಮೇಲೆ ಮಂಕು ಬಿಡಿಸಿ ಮಣಿಮೈಯೊಳಿರಿಸೆನ್ನ  ಕಳಿಸದಿರು ಕಳಿಸದಿರು ಅನಂಗರಿಪುವೆ ನೀನು.
--------------
ನಾರಾಯಣ ಗುರು
ಕಳ್ಳತನ ಮಾಡಿ ಆಡಿಕಳುವೆಲ್ಲವ ಕರುಳಲ್ಲಡಗಿಸಿದ ಈ ಅಲ್ಪನಲ್ಲಿ ಕರುಣವನ್ನಿರಿಸಿ ಪೊರೆಯಬೇಕು ದಡವುಕ್ಕಿ ಹರಿಯುವ ಸಮುದ್ರವೇ ನೀ.
--------------
ನಾರಾಯಣ ಗುರು
ಕಷ್ಟ ಈ ಕಲಿಯೊಳುಬಿದ್ದು ಹೊರಳುವುದೆಲ್ಲ ಅಲ್ಲಿ  ಸಂತುಷ್ಟನಾಗಿ ಸುಖದಲ್ಲಿ ಕಂಡು ಸಂತಸಪಡುವುದು ಯೋಗ್ಯವೇ ಕ್ಳಿಷ್ಟತೆಗೊಂದೆಡೆ ಕೊಡಬೇಕೆಂದು ನಿನ್ನಸಿರಿಯೆದೆಯಲ್ಲಿ   ಇಚ್ಛೆಯಿದ್ದೊಡೆ ಅಡಿಗೆಹತ್ತಿರ ಬರುವ ನನ್ನಲ್ಲಿಯೇ ಗುಹ ಪಾಹಿಮಾಂ
--------------
ನಾರಾಯಣ ಗುರು
ಕಸುಬುಗಳೈದೂ ಅಳಿದು ತೋರಿನಿಲ್ವ ತುಂಬುಮತಿಗಡಲು ಕಡೆದೆತ್ತಿ ಮುನ್ನ ಹರಿದುಬರುವಮೃತವನುಂಡು ಮುಳುಗಿಹೋಗದೆ ಅಳಿವಲ್ಲಿ ಕಡೆಗೆ ಉದಿಸುವುದರ್ಕಬಿಂಬ.
--------------
ನಾರಾಯಣ ಗುರು
ಕಾಡುಮೇಡನು ಕಥಿಸುತ್ತಲೋರ್ವ ಕಮನಿಮಣಿ ಕಾಂತನಾದೊಡೇನು, ಪಾಡುಕೇಡನ್ನೊದರಿ ಕೆದರಿ ಅಲೆದೊಡೇನು ಹಲವುದಾರಿಯಲ್ಲೋಡಿ, ಕಾಡುಬೀಡುಗಳೊಂದೇ ಈ ನಿನ್ನ ಸಿರಿಯಡಿಯ ಕೃಪೆಯುಕ್ಕಿ ಬರುವನಕ ಇರಲು ನಾಡುಂಟೋಡುಂಟು, ಕೂಳುಂಟು, ಓದಲಿಕ್ಕೆ ಸಿರಿಬರಹವಾರು ಉಂಟು.
--------------
ನಾರಾಯಣ ಗುರು
ಕಾಣಲ್ಪಡುವುದೆಲ್ಲವೂ ಸ್ಥೂಲ, ಸೂಕ್ಷ್ಮ, ಕಾರಣ ಎಂಬ ಈ ಮೂರು ರೂಪಗಳಿಂದ ಕೂಡಿರುವುದೂ, ಪರಮಾತ್ಮನಿಂದ ಉಂಟಾಗಿ, ಅದರಲ್ಲಿಯೇ ಲೀನವಾಗುವುದೂ ಆಗಿದೆ. ಆದ್ದರಿಂದ ಪರಮಾತ್ಮನಲ್ಲದೆ ಬೇರೇನೂ ಇಲ್ಲ. ಸಕಲ ಪಾಪಗಳನ್ನೂ ನಾಶಗೊಳಿಸುವ-ಹುರಿದು ಕಳೆಯುವ-ಪರಮಾತ್ಮನ ಯಾವ ಸ್ವರೂಪ ನನ್ನ ಬುದ್ಧಿಯನ್ನು ತಿಳಿಗೊಳಿಸಿ ಒಳ್ಳೆಯ ದಾರಿಯಲ್ಲಿ ಕೊಂಡೊಯ್ಯುವುದೋ, ಧ್ಯಾನಿಸಬೇಕಾದ ಪರಮಾತ್ಮನ ಆ ದಿವ್ಯರೂಪವನ್ನು ನಾನು ಧ್ಯಾನಿಸುತ್ತೇನೆ. ಹೇ ಪರಮಾತ್ಮನೇ, ಈ ಪ್ರಕಾರ ಎಡೆಬಿಡದೆ ನನಗೆ ತಮ್ಮನು ಧ್ಯಾನಿಸುವುದಕ್ಕೂ, ತಮ್ಮ ಪರಮಾನಂದ ಲಭಿಸುವುದಕ್ಕೂ ತಮ್ಮ ಅನುಗ್ರಹ ನನ್ನಲ್ಲಿ ಉಂಟಾಗಲಿ. ಹೇ ದೈವವೇ, ಕಣ್ಣಿಂದ ಕಾಣುವುದೊಂದೂ ನಿತ್ಯವಲ್ಲ. ಶರೀರವೂ ನೀರಿನ ಗುಳ್ಳೆಯಂತೆ ನೆಲೆ ಇಲ್ಲದ್ದು. ಎಲ್ಲವೂ ಸ್ವಪ್ನಸಮಾನವೆಂದಲ್ಲದೆ ಏನೂ ಹೇಳುವಂತಿಲ್ಲ. ನಾವು ಶರೀರವಲ್ಲ, ಅರಿವು. ಶರೀರ ಉಂಟಾಗುವ ಮುನ್ನವೂ ಅರಿವಾದ ನಾವಿದ್ದೆವು. ಇನ್ನು ಇದೆಲ್ಲವೂ ಇಲ್ಲದೆ ಹೋದರೂ ನಾವು ಹೀಗೆ ಪ್ರಕಾಶಿಸುತ್ತಲೇ ಇರುತ್ತೇವೆ. ಜನನ, ಮರಣ, ಬಡತನ, ರೋಗ, ಭಯ ಇವೇನೂ ನಮ್ಮನ್ನು ಮುಟ್ಟುವುದಿಲ್ಲ. ಈ ರೀತಿ ಉಪದೇಶಿಸಲ್ಪಡುವ ತಿರುವಾಕ್ಕುಗಳನ್ನೂ, ಈ ತಿರುವಾಕ್ಕುಗಳ ಉಪದೇಶಕನಾದ ಪರಮಾತ್ಮನನ್ನೂ ನಾನು ಉಣ್ಣುವಾಗಲೂ ಮಲಗುವಾಗಲೂ ಎಡೆಬಿಡದೆ ಯಾವಾಗಲೂ ನೆನೆಯುವಂತಾಗಲಿ. ನೀನು ನನ್ನ ಎಲ್ಲ ಪಾಪಗಳನ್ನೂ ಕಸಿದುಕೊಂಡು ನನಗೆ ನಿನ್ನ ಪರಮಾನಂದವನ್ನು ನೀಡಬೇಕು. ನನ್ನ ಲೋಕವಾಸವು ಕಷ್ಟಗಳು ಕೂಡದೆ ಕಳೆಯುವುದಕ್ಕೂ, ಕಡೆಯಲ್ಲಿ ನಿನ್ನ ಪರಮಪದವನ್ನು ಪ್ರಾಪಿಸುವುದಕ್ಕೂ ನಿನ್ನ ಅನುಗ್ರಹವು ನನ್ನಲ್ಲಿ ಉಂಟಾಗಲಿ.
--------------
ನಾರಾಯಣ ಗುರು
ಕಾಣುವ ಕಣ್ಣಲ್ಲಡಗುತ ಕಾಣುವುದಿಲ್ಲ ಈ ನಿರಂತರ ಸಕಲವನು ಶಬ್ದವು ಕಿವಿಯಲ್ಲಡಗುವಂತೆ ತೊಗಲಲಿ ಅಳಿದು ಸ್ಪರ್ಶ ಹೋಗುವುದು
--------------
ನಾರಾಯಣ ಗುರು
ಕಾಣುವ ಕಣ್ಣಿಂಗೆ ಯಾವ ದಂಡವಿಲ್ಲ ಕಂಡೆನ್ನ ಪ್ರಾಣ ಬಿಡುವೊಡೆ ಏಕೆ ಮತ್ತೆಲ್ಲವು ಕಾಣುವ ಬಣ್ಣ ಬಗೆಯಿದೆಲ್ಲವಳಿದೇಳ್ವ ನಿನ್ನ ಸೊಬಗಿನ ಕೆಂಗಾಲನಿತ್ತು ಜಯಿಸೊ ಶಂಭೋ.
--------------
ನಾರಾಯಣ ಗುರು
ಕಾಣುವುದು ಕಣ್ಣಿಂತು ತೆರೆದೊಡೆ, ಮುಚ್ಚಿದೊಡಂಧ ತಾನೊಳಗಿರುವನು ಅರಿವಿಲ್ಲಿ ಬಾರದ್ದರಿಂದ. ಜ್ಞಾನವು ಹೊರಗೆ ತಾನೇ ಬರುವುದಿಲ್ಲ ಕಣ್ಣು ಬೇಕು ಬರಲಿಕ್ಕೆ, ಕಣ್ಣಿಗೆ ಕಾಂತಿಯಂತೆ.
--------------
ನಾರಾಯಣ ಗುರು
ಕಾದು ಜಯಿಸಲಸಾಧ್ಯ ಒಂದರೊಂದಿಗೆ ಯಾವಮತವೂ ಕಾದು ತೊಲಗುವುದಿಲ್ಲ, ಪರಮತವಾದಿಯಿದನ್ನು ನೆನೆಯದೆ ಸುಮ್ಮನೆ ಕಾದಿ ಕೆಡುವವನೆಂಬ ಬುದ್ಧಿಬೇಕು.
--------------
ನಾರಾಯಣ ಗುರು
ಕಾರಣಾವ್ಯತಿರಿಕ್ತತ್ವಾತ್ ಕಾರ್ಯಸ್ಯ ಕಥಮಸ್ತಿತಾ? ಭವತ್ಯತಃ ಕಾರಣಸ್ಯ ಕಥಮಸ್ತಿ ಚ ನಾಸ್ತಿತಾ?
--------------
ನಾರಾಯಣ ಗುರು
ಕಾರ್ಗೂದಲ ಚೆಲುವೆಯರೊಡನೆ ಕಲೆತುಕರಗಿ ಆ ಹೂಮೊಗ್ಗಿನಡಿಯಗಲಿ ಬಳಲುತಿಹನಡಿಯನಿಲ್ಲಿ  ಹೆಗ್ಗರುಣೆಯ ತೊರೆಯುಟ್ಟಯ್ಯನ ಮರೆಯುತ್ತಲೀ  ಜೆಪುಣನಿನ್ನುಳಿಯಬೇಕೇಕೆ ಉಸಿರಾಡುತ್ತಲಿ?
--------------
ನಾರಾಯಣ ಗುರು
ಕಾರ್ಮುಗಿಲ್ವರ್ಣ ತನ್ನಕ್ಷಿಯನು ಕಿತ್ತು ನಿನ್ನ ಚರಣದ್ವಯದಲ್ಲಿ ಅರ್ಚನೆ ಗೆಯ್ದಂತೆ ಸಾದ್ಧ್ಯವಾಗುವುದೇ ಇವಂಗಿಂದು ನೀ ನಿನ್ನ ಕಣ್ಮೊನೆಯನಿತ್ತೆನೆಗೆ ವರವ ನೀಡೊ 
--------------
ನಾರಾಯಣ ಗುರು
ಕಾರ್ಯತ್ವಾದಸತೋ’ಸ್ಯಾಸ್ತಿ ಕಾರಣಂ ನ ಹ್ಯತೋ ಜಗತ್ ಬ್ರಹ್ಮೈವ ತರ್ಹಿ ಸದಸ- ದಿತಿ ಮುಹ್ಯತಿ ಮಂದಧೀಃ.
--------------
ನಾರಾಯಣ ಗುರು